ಬದುಕಾಗಲಿ ಬೆಳಕು

ಹರಿ ನೀನು ನನ್ನ ಅಮರತ್ವದ ಸಿರಿ
ನಿನ್ನೊಂದಿಗೆ ಜನ್ಮ ಜನ್ಮ ಬಂಧ
ನಿನ್ನ ತೊರೆದು ಇನ್ನೊಂದು ಬಯಸಿದರೆ
ಅದೆಲ್ಲವೂ ಎನ್ನ ಭವದ ಬಂಧ

ನಿನ್ನೊಂದಿಗೆ ಚಲ್ಲಾಟ, ನಿನ್ನೊಂದಿಗೆ ಮೋಜು
ಅದುವೆ ಎನಗಿರಲಿ ದಿನರೋಜು
ಸತ್ಯದತ್ತ ವಾಲಿ ಅಂತರಂಗಕ್ಕೆ ಜಾರಿ
ನಾ ಮರೆಯಲಿ ಈ ಸಂಸಾರದ ಗೋಜು

ಎತ್ತ ನೋಡಿದರೂ ಇಲ್ಲಿ ಜನರ ಹುಡುಕಾಟ
ಅದುವೆ ಗೇಣು ಉದರದ ಮಾಟ
ಅದಕ್ಕಾಗಿ ಹಗಲಿರುಳು ಬರೀ ಹೋರಾಟ
ಮಾನವ ಜನ್ಮದ ಅರ್ಥ ಕಿಂಚಿತ್ತಿಲ್ಲ ನೋಟ

ಇನ್ನೂ ಎನ್ನ ಬಾಳಲಿ ಕಾಡದಿರಲಿ ಆಸೆ
ನಿಂತು ಹೋಗಲಿ ಇಂದ್ರಿಯಗಳ ವ್ಯಾಪಾರ
ನಿನ್ನ ಚಿತ್ತಾರದಲಿ ಎನ್ನ ಬದುಕಾಗಲಿ ಬೆಳಕು
ಮಾಣಿಕ್ಯ ವಿಠಲನಿಗೆ ನಿನ್ನ ಕೃಪೆ ಸಾಕು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಟ್ಟುವೆವು ನಾವು
Next post ಸಾರುವೆ ಜನಾಃ ಸುಖಿನೋಭವಂತು!

ಸಣ್ಣ ಕತೆ

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

cheap jordans|wholesale air max|wholesale jordans|wholesale jewelry|wholesale jerseys